ಗರ್ಭದಲ್ಲಿರುವ ಮಗುವಿನೊಂದಿಗೆ ಸಂಭಾಷಣೆ

ಗರ್ಭದಲ್ಲಿರುವ ಮಗು ಹೊರಜಗತ್ತಿನೊಂದಿಗೆ ಯಾವ ಸಂಪರ್ಕವನ್ನು ಹೊಂದಿರಲಾರದು ಎಂಬ ಈವರೆಗಿನ ವಿಜ್ಞಾನ, ಈಗ ಬದಲಾಗಿದೆ. ಗರ್ಭಧರಿಸಿದವಳು ತನ್ನ ಹೊಟ್ಟೆಯೊಳಗಿನ ಮಗುವಿನೊಂದಿಗೆ ಮಾತನಾಡಬಹುದು ಎಂಬ ಸಂಶೋಧನೆಯನ್ನು ಬ್ರಿಟನ್ನಿನ ವಿಜ್ಞಾನಿ ಕ್ರಿಸ್ಟಫರ್ ಪ್ರಯೋಗಗಳಿಂದ ದೃಢೀಕರಿಸಿದ್ದಾರೆ. ಗರ್ಭಧರಿಸಿದ ತಾಯಿ ಮಾನಸಿಕವಾಗಿ, ದೈಹಿಕವಾಗಿ ಬಳಲಿದಾಗ ಮಗು ಬಳಲುತ್ತದೆ. ಉಲ್ಲಾಸದಿಂದಿರುವಾಗ ಒಳಗಡೆಯ ಶಿಶುವೂ ಕೂಡ ಆರೋಗ್ಯ ಪೂರ್ಣವಾಗಿ ಬೆಳೆಯುತ್ತದೆ.

ತಾಯಿಯಾದವಳು ಗರ್ಭದೊಳಗಿನ ತನ್ನ ಮಗುವಿನೊಂದಿಗೆ ಮಾತನಾಡಲು ‘ಎಂಬ್ರಿಯೋಫೋನ್’ ಎಂಬ ಹೊಸ ಉಪಕರಣವನ್ನು ಬಳಸಬಹುದಾಗಿದೆ. ಸಣ್ಣ ಗಾತ್ರದ ಒಂದು ಮೈಕ್ರೋಫೋನ್ ಮತ್ತು ಮೊಬೈಲ್ ರೀಸಿವರ್‌ವನ್ನು ಒಳಗೊಂಡಿರುವ ಈ ಉಪಕರಣವನ್ನು ಗರ್ಭಿಣಿಯ ಸೊಂಟಕ್ಕೆ ಬೆಲ್ಟಿನ ಮೂಲಕ ಕಟ್ಟಲಾಗುತ್ತದೆ. ಕೈಯಲ್ಲಿರುವ ರಿಸೀವರ್‌ನಲ್ಲಿ (ಮೂಲಕ) ಮಾತನಾಡಿದಾಗ ಆ ಶಬ್ಧಗಳನ್ನು ಮೈಕ್ರೋಫೋನ್ ದಾಖಲಿಸಿಕೊಂಡು ಗರ್ಭದಲ್ಲಿರುವ ಮಗುವಿನ ಕಿವಿಗೆ ತಲುಪಿಸುತ್ತದೆ. ಗರ್ಭಿಣಿಯು ತಾನು ಗರ್ಭಧರಿಸಿದ ೪ನೇ ತಿಂಗಳಿನಿಂದ ಈ ರೀತಿಯ ಸಂದೇಶಗಳನ್ನು ಗರ್ಭಸ್ಥ ಶಿಶುವಿನ ಕಿವಿಗೆ ಕಳಿಸಬಹುದು.

ಈ ರೀತಿ ಗರ್ಭದೊಳಗಿನ ಶಿಶುವಿನೊಂದಿಗೆ ಸಂಭಾಷಣೆ ನಡೆಸುವುದರಿಂದ ಮಗುವಿನ ನರವ್ಯೂಹಗಳಲ್ಲಿ ತ್ವರಿತಗತಿಯಲ್ಲಿ ಕಾರ್ಯನಿರ್ವಹಿಸುತ್ತವೆ. ಮತ್ತು ಮಾನಸಿಕ, ದೈಹಿಕವಾಗಿಯೂ ಮಗು ಆರೋಗ್ಯಪೂರ್ಣವಾಗಿ ಬೆಳವಣಿಗೆ ಹೊಂದುತ್ತದೆಂದು ಸಂಶೋಧಕರು ಪ್ರಯೋಗಗಳಿಂದ ಕಂಡುಕೊಂಡಿದ್ದಾರೆ ಅಲ್ಲದೇ ಹೆರಿಗೆಯ ಸಮಯದಲ್ಲಿಯೇ ಮಗು ತಾಯಿಯನ್ನು ಗ್ರಹಿಸಲು ಇದರಿಂದ ಸಾಧ್ಯವಾಗುತ್ತದೆ. ‘ಎಂಬ್ರಿಯೋ ಫೋನ್’ ಎನ್ನುವ ಈ ಉಪಕರಣ ಕೆಲವೇ ವರ್ಷಗಳಲ್ಲಿ ಮಾರುಕಟ್ಟೆಗೆ ಬರಲಿದೆ.
******

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮರಕ್ಕೆ ಸದ್ಯ ಬಾಯಿಲ್ಲ
Next post ದಿವ್ಯೋಪಕರಣ

ಸಣ್ಣ ಕತೆ

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…

  • ಕೂನನ ಮಗಳು ಕೆಂಚಿಯೂ….

    ಬೊಮ್ಮನಹಳ್ಳಿ ಸಂತೆಯಿಂದ ದಲ್ಲಾಳಿಗೆ ಸಂಚಾಗಾರ ಎಂದು ನೂರು ರೂಪಾಯಿ ಸೇರಿ ಒಂದು ಸಾವಿರದ ಒಂದುನೂರು ಕೊಟ್ಟು ತಂದ ’ಚೆನ್ನಿ’ಕರುಹಾಕಿ ಮೂರು ತಿಂಗಳಲ್ಲಿ ಕೊಟ್ಟಿಗೆಯೊಳಗೆ ಕಾಲು ಜಾರಿ ಬಿದ್ದದ್ದೆ… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ಪಾಠ

    ಚೈತ್ರ ಮಾಸದ ಮಧ್ಯ ಕಾಲ. ಬೇಸಿಗೆ ಕಾಲಿಟ್ಟಿದೆ. ವಸಂತಾಗಮನ ಈಗಾಗಾಲೇ ಆಗಿದೆ. ಊರಲ್ಲಿ ಸುಗ್ಗಿ ಸಮಯ. ಉತ್ತರ ಕರ್ನಾಟಕದ ನಮ್ಮ ಭಾಗದಲ್ಲಿ ಹತ್ತಿ ಜೋಳ ಪ್ರಮುಖ ಬೆಳೆಗಳು.… Read more…

cheap jordans|wholesale air max|wholesale jordans|wholesale jewelry|wholesale jerseys